ಸಂಶೋಧನಾ ವಿದ್ಯಾರ್ಥಿನಿ ಶ್ರೀದೇವಿ ಅವರ ಸಾವಿಗೆ ಮಾರ್ಗದರ್ಶಕರೇ ಕಾರಣ ಎನ್ನುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ, ಹಣಕ್ಕಾಗಿ ಶ್ರೀದೇವಿ ಅವರಿಗೆ ಕಿರುಕುಳ ನೀಡಿದ್ದರಿಂದ ಅವರು ಖಿನ್ನ ತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎನ್ನಲಾಗಿದೆ. ಹಣಕ್ಕಾಗಿ ವಿದ್ಯಾರ್ಥಿ ನಿಯ ಜೀವ ಹೋಗಿದ್ದು, ತಡಮಾಡದೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿ ಗಳಿಗೆ ಸೂಚನೆ ನೀಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.