ನಿವೃತ್ತಿಗೆ ಒಂದು ವರ್ಷಕ್ಕೂ ಮೊದಲೇ, 2014ರ ನವಂಬರ್ನಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಸಪೋಟ, ಪೇರಲ, ನಿಂಬೆ, ಸೀತಾಫಲ, ಮಾವು, ಪಪ್ಪಾಯಿ ತೆಂಗು, ಹಲಸು ಸೇರಿ ಸಾವಿರಕ್ಕ್ಕೂ ಹೆಚ್ಚು ಸಸಿಗಳನ್ನು ಆಂಧ್ರದ ರಾಜಮಂಡ್ರಿಯಿಂದ ತಂದು ನೆಟ್ಟಿದ್ದರು. ಅವುಗಳಲ್ಲಿ ಸೀತಾಫಲವೇ ಹೆಚ್ಚು. ಕೊಳವೆ ಬಾವಿಯ ನೀರನ್ನು ನೆಚ್ಚಿಕೊಂಡರುವ ಅವರು ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದು, ಯಾವುದೇ ರಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರದಿಂದ ತೋಟವನ್ನು ಬೆಳೆಸಿದ್ದಾರೆ. ಸಪೋಟ, ಪೇರಲ, ನಿಂಬೆ, ಮಾವು ಹಾಗೂ ಪಪ್ಪಾಯಿ ಮರಗಳಲ್ಲಿ ಹಣ್ಣುಗಳು ತೊನೆದಾಡುತ್ತಿವೆ. ತೆಂಗು, ಹಲಸು, ನೆರಳೆ, ನೆಲ್ಲಿ ಬೆಳೆಯುತ್ತಿವೆ.