ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ರೈತರಿಗೆ ಬಿತ್ತನೆಗಾಗಿ ಮೂರು ಕೂರಿಗೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ನೀಡಿ ಬಿತ್ತನೆ ಮಾಡುವ ತಾಂತ್ರಿಕತೆಯನ್ನು ತಿಳಿಸಿಕೊಡಲಾಗುತ್ತಿದೆ. ಜುಲೈ ಅಂತ್ಯದವರೆಗೂ ಧೀರ್ಘಾವಧಿ ಭತ್ತದ ತಳಿಗಳಾದ ಸೋನಾ
ಮಸೂರಿ, ಗಂಗಾವತಿ ಸೋನಾ, ನೆಲ್ಲೂರು ಸೋನಾ, ಕಾವೇರಿ ಸೋನಾ ತಳಿಗಳು ಬಿತ್ತನೆಗೆ ಸೂಕ್ತವಾಗಿದ್ದು, ಜುಲೈನಿಂದ ಆಗಸ್ಟ್ವರೆಗೂ ರೈತರು ಬೇಗ ಬರುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆರ್ಎನ್ಆರ್–15048 ತಳಿಯು ಬೇಗ ಬರುತ್ತದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಸಿದಲ್ಲಿ ಎತ್ತರವಾಗಿ ಬೆಳೆದು ಬಾಗುವ ಲಕ್ಷಣ ಕಂಡುಬರುತ್ತದೆ. ಸವಳು ಭೂಮಿಗೆ ಗಂಗಾವತಿ ಕೃಷಿ ಸಂಶೋಧನ ಕೇಂದ್ರ ಬಿಡುಗಡೆಗೊಳಿಸಿರುವ ಗಂಗಾವತಿ ಸೋನಾ ಸವಳು ಭೂಮಿಯಲ್ಲಿಕೂಡ ಉತ್ತಮ ಇಳುವರಿ ಕೊಡುತ್ತದೆ ಎಂದು ಮಾಹಿತಿ ನೀಡಿದರು.