ಹೂವಿನಹಡಗಲಿ: ಈ ಶಾಲೆಯ ಮಕ್ಕಳು ಸ್ವಚ್ಛ ಭಾರತ ಆಂದೋಲನ ಘೋಷಣೆ ಕೂಗುತ್ತಾ ಗ್ರಾಮಸ್ಥರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸುತ್ತಾರೆ. ಆದರೆ, ಈ ಊರಿನ ಜನರು ಚರಂಡಿ ತ್ಯಾಜ್ಯವನ್ನು ಶಾಲೆಯ ಆವರಣಕ್ಕೆ ಹರಿಸಿ, ವಾತಾವರಣವನ್ನು ಕಲುಷಿತ ಗೊಳಿಸಿ ದ್ದಾರೆ. ಮಕ್ಕಳು ದುರ್ನಾತದಲ್ಲಿಯೇ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.