ಮಾವು (ವಿವಿಧ ತಳಿಗಳು ₹28), ಸಪೋಟ (32), ತೆಂಗು (ತಿಪಟೂರು 50 ಮತ್ತು ಹೈಬ್ರಿಡ್ 150), ನುಗ್ಗೆ(10), ಕರಿಬೇವು (10), ನಿಂಬೆ(12) ಸೇರಿ ದಂತೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳು(₹20–₹25) ನೀಡಲಾಗುತ್ತಿದೆ. ₹ಜಿಲ್ಲೆಯ ಲ್ಲಿರುವ 8 ತೋಟಗಾರಿಕೆ ಕ್ಷೇತ್ರ ಹಾಗೂ ಮೂರು ನರ್ಸರಿಗಳಿದ್ದು, ದೇಶನೂರು, (ಸಿರುಗುಪ್ಪ ತಾಲ್ಲೂಕು) ಧರ್ಮಾಪುರ, ತೋರಣಗಲ್ಲು, ರಾಘಪುರ (ಸಂಡೂರು), ಬುಕ್ಕಸಾಗರ (ಹೊಸಪೇಟೆ), ಮಾಲವಿ, ಆನಂದದೇವ ಕನಹಳ್ಳಿ (ಹಗರಿಬೊಮ್ಮನ ಹಳ್ಳಿ), ಬಿ. ಗೋನಳ್( ಬಳ್ಳಾರಿ) ತೋಟಗಾರಿಕೆ ಕ್ಷೇತ್ರಗಳು ಹಾಗೂ ಸಂಡೂರು ತಾಲ್ಲೂಕು ತೋಟಗಾರಿಕೆ ಇಲಾಖೆಯ ಕಚೇರಿ ನರ್ಸರಿ, ಹೊಸಪೇಟೆಯ ಕಚೇರಿ ನರ್ಸರಿ ಮತ್ತು ಬಳ್ಳಾರಿ ತಾಲ್ಲೂಕಿನ ತೋಟ ಗಾರಿಕೆ ಕಚೇರಿ ನರ್ಸರಿಗಳಲ್ಲಿ ತೆಂಗು, ಮಾವು, ಸಪೋಟ, ನಿಂಬೆ, ನುಗ್ಗೆ ಬೆಳೆಸಲಾಗುತ್ತಿದೆ ಎಂದು ಸಂಡೂರು ಮತ್ತು ಕೂಡ್ಲಿಗಿ ತಾಲ್ಲೂಕು ಸಸ್ಯ ಸಂತೆ ಉಸ್ತುವಾರಿ ಹೊತ್ತಿರುವ ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ಸಿ. ಕುಬೇರಾಚಾರಿ ಹೇಳುತ್ತಾರೆ.