ಆನೇಕಲ್: ಸದಾ ಮೊಬೈಲ್ನಲ್ಲಿ ಕಾಲ ಕಳೆಯುತ್ತ ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ 12 ವರ್ಷದ ತಮ್ಮನನ್ನು ಹೆದರಿಸಲು 18 ವರ್ಷದ ಅಣ್ಣ ಸುತ್ತಿಗೆಯಿಂದ ತಲೆಗೆ ಹೊಡೆದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಠಾಣೆಯ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲೆ ಆರೋಪಿ ಅಣ್ಣನನ್ನು ಸರ್ಜಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮಂತ್ರಾಲಯ ಸಮೀಪದ ಗ್ರಾಮವೊಂದರ ವ್ಯಕ್ತಿ ಗಾರೆ ಕೆಲಸಕ್ಕಾಗಿ ಇಲ್ಲಿಗೆ ಬಂದು ಸರ್ಜಾಪುರ ಬಳಿ ಕುಟುಂಬ ಸಮೇತ ವಾಸವಿದ್ದರು. ಅವರ ಇಬ್ಬರು ಗಂಡು ಮಕ್ಕಳ ಪೈಕಿ ಚಿಕ್ಕವ ಆನ್ಲೈನ್ನಲ್ಲಿ ಗೇಮ್ಗಾಗಿ ಅಣ್ಣನ ಮೊಬೈಲ್ ಬಳಸುತ್ತಿದ್ದ. ಆನ್ಲೈನ್ ಗೇಮ್ನಲ್ಲಿ ಹಣ ಕಳೆದಿದ್ದ.
ಅತಿಯಾದ ಮೊಬೈಲ್ ಬಳಸುವ ಮತ್ತು ಆನ್ಲೈನ್ ಗೇಮ್ ಗೀಳು ಬಿಡಿಸಲು ಹೆದರಿಸುವ ಸಲುವಾಗಿ ಅಣ್ಣ, ಸುತ್ತಿಗೆಯಿಂದ ತಲೆಗೆ ಹೊಡೆದಿದ್ದರು. ಹೊಡೆದ ರಭಸಕ್ಕೆ ರಕ್ತಸ್ರಾವವಾಗಿ ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.