‘ಸರ್ಕಾರ 2016ರಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಸರ್ಕಾರಿ ಜಾಗ, ಗೋಮಾಳ, ರಾಜ ಕಾಲುವೆ, ಕೆರೆಯಂಗಳ ಮತ್ತು ಸ್ಮಶಾನ ಒತ್ತುವರಿ ತೆರವುಗೊಳಿಸಿ ಸ್ಮಶಾನ ಮತ್ತು ಕೆರೆಯಂಗಳ ಹದ್ದುಬಸ್ತು ಮಾಡಿ ತಂತಿಬೇಲಿ ತಡೆಗೋಡೆ ನಿರ್ಮಿಸುವಂತೆ ಭೂಮಾಪನ ಇಲಾಖೆ ಹಾಗೂ ಸ್ಥಳೀಯ ಪುರಸಭೆ ಹಾಗೂ ನಗರ ಸಭೆಗಳಿಗೆ ಆದೇಶ ಮಾಡಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ನಾಲ್ಕಾರು ದಿನ ಒತ್ತುವರಿ ಜಾಗಗಳ ಆಳತೆ ಮಾಡಿ ಕೈಬಿಟ್ಟಿರುವುದು ಹೊರತುಪಡಿಸಿದರೆ ನಂತರ ಯಾವುದೇ ತೆರವು ಕಾರ್ಯಾಚರಣೆ ನಡೆಸಿಲ್ಲ. ಅಧಿಕಾರಿಗಳ ಕಣ್ಮಂದೆಯೇ ಒತ್ತುವರಿಯಾಗುತ್ತಿದ್ದರೂ ಕಡಿವಾಣ ಹಾಕುವ ಪ್ರಯತ್ನ ನಡೆದಿಲ್ಲ. ಇದರಲ್ಲಿ ಭೂಮಾಫಿಯಾ ಕೈವಾಡ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.