ಬನ್ನೇರುಘಟ್ಟ ಜೈವಿಕ ಉದ್ಯಾನದ 20 ಹೆಕ್ಟೇರ್ ಪ್ರದೇಶದಲ್ಲಿ ಚಿರತೆ ಸಫಾರಿಗೆ ಸಿದ್ಧತೆ ಮಾಡಲಾಗಿದೆ. ಚಿರತೆಗಳು ಹೊರ ಬರಲು ಸಾಧ್ಯವಾಗದಂತೆ ಎತ್ತರವಾದ ಮೆಶ್ ಮತ್ತು ಬೇಲಿ ಹಾಕಲಾಗಿದೆ. ಮಹಾರಾಷ್ಟ್ರ ಮತ್ತು ನಾಗಪುರದಲ್ಲಿ ಚಿರತೆ ಸಫಾರಿ ಇದೆ. ಆದರೆ, ಇವೆಲ್ಲಕ್ಕಿಂತ ಬನ್ನೇರುಘಟ್ಟ ಸಫಾರಿ ದೊಡ್ಡದಾಗಿದೆ. ಸದ್ಯ 12 ಚಿರತೆಗಳಿದ್ದು ಇವುಗಳನ್ನು ಸಫಾರಿಗೆ ಪಳಗಿಸಲು ಪ್ರಾಣಿ ಪಾಲಕರು ಶ್ರಮಿಸುತ್ತಿದ್ದಾರೆ. ಚಿರತೆಗಳ ಆವರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ಮಿಸಲಾಗಿದೆ. ಚಿರತೆ ಸಫಾರಿಗೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದರು.