ಕೈತೊಳೆಯಲು ಕೃಷಿ ಹೊಂಡಕ್ಕೆ ಹೋದ ಮಗಳು ಭಾರತಿ ಜಾರಿ ಬಿದ್ದು, ಮುಳಗುತ್ತಿರುವುದನ್ನು ಗಮನಿಸಿದ ಆಕೆ ತಂದೆ ಮರಿಯಪ್ಪ ಮತ್ತು ತಾಯಿ ಮುನಿಯಮ್ಮ ಮಗಳನ್ನು ರಕ್ಷಿಸಲು ಕೃಷಿ ಹೊಂಡಕ್ಕೆ ಇಳಿದಿದ್ದಾರೆ. ಕೆರೆಯಲ್ಲಿ ಹೂಳು ತುಂಬಿದ್ದರಿಂದ ಮೂವರು ಹೊರಬರಲಾಗದೆ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸಂಬಂಧ ಮೃತರ ಸಂಬಂಧಿಕರು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.