ಉಸ್ಮಾನ್ ಮಾತನಾಡಿ, ‘ನಾನು ಚಿಕ್ಕಬಳ್ಳಾಪುರದಲ್ಲಿ ಆಟೊ ಓಡಿಸಿಕೊಂಡು ಜೀವನ ಮಾಡುತ್ತಿದ್ದೇನೆ. ಸಿಮ್ರಾನ್ ಕಾಲೇಜಿಗೆ ಬರುವಾಗ ಪರಿಚಯವಾದರು. ಪರಿಚಯ ಪ್ರೇಮವಾಯಿತು. ನಂತರ ನಮ್ಮ ಸಂಬಂಧಿಕರೇ ಎಂಬುದು ಗೊತ್ತಾಗಿ ಮದುವೆ ಮಾಡಿಕೊಳ್ಳಲು ಯಾವುದೇ ಅಡ್ಡಿ ಬರುವುದಿಲ್ಲವೆಂದು ಅನ್ನಿಸಿತು. ಆದರೆ, ಅವರ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಸಿಮ್ರಾನ್ಗೆ ಬೇರೆ ಸಂಬಂಧ ನೋಡುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಅವರ ಸಂಪೂರ್ಣ ಒಪ್ಪಿಗೆ ಮೇರೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದೇವೆ. ಇದರಲ್ಲಿ ಯಾರ ಪಾತ್ರವೂ ಇಲ್ಲ. ನಾವಿಬ್ಬರು ಸುಖವಾಗಿ ಬಾಳಲು ಅವಕಾಶ ಮಾಡಿಕೊಡಿ ಎಂದಷ್ಟೇ ಕೇಳುತ್ತೇನೆ’ ಎಂದರು.