ಈ ಕುರಿತು ರಾಗಿ ಕೇಂದ್ರದ ಅಧಿಕಾರಿ ಅಚ್ಯುತ ಮಾತನಾಡಿ, ‘ರೈತರ ಖಾತೆಗಳಿಗೆ ಜಮೆಯಾಗದೆ ಬಾಕಿ ಉಳಿದಿದ್ದ ಹಣವನ್ನು ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಆರ್.ಟಿ.ಜಿ.ಎಸ್ ಮೂಲಕ ಸೋಮವಾರ ಜಮೆ ಮಾಡಲಾಗಿದೆ. ಕೆಲವು ರೈತರು ಕೆವೈಸಿ.ಮಾಡಿಲ್ಲ, ಕೆಲವರು ಮೃತಪಟ್ಟಿದ್ದಾರೆ. ಅಂಥ ರೈತರ ಖಾತೆಗಳಿಗೆ ಹಣ ಜಮೆಯಾಗಿಲ್ಲ. ಇಂಥ ರೈತರಿಗೆ ಸಂಬಂಧಿಸಿದವರು ದಾಖಲೆಗಳನ್ನು ಸರಪಿಡಿಸಿಕೊಳ್ಳಬೇಕು’ ಎಂದು ತಿಳಿಸಿದರು.