‘₹1.5 ಕೋಟಿ ವೆಚ್ಚದಲ್ಲಿ ಪಂಚಾಯಿತಿ ಕಟ್ಟಡವನ್ನು ನವೀಕರಿಸಲಾಗಿದ್ದು, ಇತ್ತೀಚೆಗಷ್ಟೇ ನಿರ್ಗಮಿತ ಜಿ.ಪಂ ಸಿಇಒ ಕೆ.ರೇವಣಪ್ಪ ಅವರು ಉದ್ಘಾಟಿಸಿದ್ದರು. ಇದಾದ ಬಳಿಕ ಎರಡನೇ ಶನಿವಾರ ಶಂಕು ಸ್ಥಾಪನೆಯ ಅಡಿಗಲ್ಲು ನಾಮಫಲಕ ಅಳವಡಿಸಲಾಗಿದೆ. ಫಲಕದಲ್ಲಿ ನಮೂದಿಸಿರುವಂತೆ ಸೆಪ್ಟೆಂಬರ್ 2021ರಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯೂ ಅಸ್ತಿತ್ವದಲ್ಲಿಯೇ ಇರಲಿಲ್ಲ, ಆದರೆ, ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ಹೇಗೆ ಹಾಕಿಸಿದ್ದಾರೆ’ ಎಂದು
ಪ್ರಶ್ನಿಸಿದರು.