ಈ ಬಾರಿ ತೀವ್ರ ಮಳೆಯ ಕೊರತೆಯಿಂದಾಗಿ ರಾಗಿ ಸೇರಿದಂತೆ ಅವರೆ, ಅಲಸಂದೆ, ತೊಗರಿ, ಸಾಸಿವೆ, ಯಾವ ಬೆಳೆಗಳೂ ಸರಿಯಾಗಿ ಆಗಿಲ್ಲ. ಆದ್ದರಿಂದ ಧವಸ–ಧಾನ್ಯಗಳ ಬೆಲೆಗಳು ಏರಿಕೆಯಾಗುತ್ತಲೇ ಇವೆ. ರಾಗಿ ಒಂದು ಕ್ವಿಂಟಾಲ್ಗೆ 3 ಸಾವಿರಕ್ಕೆ ಏರಿಕೆಯಾಗುತ್ತಿರುವುದರಿಂದ ಸಾಮಾನ್ಯ ವರ್ಗದ ಜನರೂ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುವಂತಾಗಿದ್ದು ಜಾನುವಾರುಗಳ ಮೇವಿಗೂ ಪರದಾಟವಾಗುತ್ತಿದೆ. ಇದಕ್ಕೆ ರೈತರೂ ಹೊರತಾಗಿಲ್ಲ.