ಶುಕ್ರವಾರ ಮಧ್ಯಾಹ್ನ ಕಾಡಿನಲ್ಲಿ ದನ ಮೇಯಿಸಲು ತೆರಳಿದ್ದ ವ್ಯಕ್ತಿಗಳಿಗೆ ಮನುಷ್ಯನ ಅಸ್ತಿಪಂಜರ ಕಾಣಿಸಿದೆ. ತಕ್ಷಣವೇ ಅವರು ವಿಷಯನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮೃತರ ಸಂಬಂಧಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಹೊಂಬಾಳೇಗೌಡರ ಶವ ಎಂಬುದು ಪತ್ತೆಯಾಗಿದೆ.