ಆನೇಕಲ್ : ತಾಲ್ಲೂಕಿನ ಸಬ್ಮಂಗಲ ಸಮೀಪದ ಬೂರಗ ಮುನೇಶ್ವರ ಸ್ವಾಮಿ ದೇವರ ರಥಸಪ್ತಮಿ ಕಾರ್ಯಕ್ರಮ ಗುರುವಾರ ಅದ್ಧೂರಿಯಾಗಿನೆರವೇರಿತು. ಬೂರಗ ಮುನೇಶ್ವರ ಸ್ವಾಮಿ ದೇವರ ಉತ್ಸವದ ಅಂಗವಾಗಿ ಸಬ್ಮಂಗಲ, ತಮಿಳುನಾಡಿನ ಕೊಮಾರನಹಳ್ಳಿ, ಸೆಕೆಂಡ್ಮದರಾಸ್ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ದೇವಾಲಯದ ಬಳಿ ಆಗಮಿಸಿದ್ದವು.ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ಭಕ್ತಿ ಸಮರ್ಪಿಸಿದರು. ಸಮಂದೂರು: ಗ್ರಾಮದ ಸೂರ್ಯನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಗುರುವಾರ ನಡೆದವು. ಪ್ರಾಚೀನ ಸೂರ್ಯನಾರಾಯಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಉತ್ಸವಗಳು ನಡೆದವು.