‘ಧರ್ಮ ಕ್ಷೇತ್ರಗಳ ಮೇಲೆ ಈ ರೀತಿಯ ಆರೋಪ ಇದೇ ಮೊದಲಲ್ಲ. ಅನಾದಿ ಕಾಲದಿಂದಲೂ ಷಡ್ಯಂತ್ರ ಮುಂದುವರಿದು ಬಂದಿದೆ. ರಾಮನ ಕಾಲದಲ್ಲಿದ್ದ ರಾವಣ, ಪಾಂಡವರ ಕಾಲದಲ್ಲಿದ್ದ ಕೌರವರಂತೆ ಈಗಲೂ ಧರ್ಮ ಕಂಟಕರು ಇದ್ದಾರೆ. ಆದರೆ, ಕೊನೆಗೆ ಧರ್ಮ– ಸತ್ಯಗಳೇ ಗೆಲ್ಲುತ್ತವೆ. ಧರ್ಮದ ಹಾದಿಯಲ್ಲಿ ಹೊರಟವರಿಗೆ ಇಂಥ ಅಡ್ಡಿಗಳು ಸಾಮಾನ್ಯ’ ಎಂದು ಅವರು ತಿಳಿಸಿದರು.