ಜಮೀನಿನ ಹಕ್ಕು ಬದಲಾಯಿಸಲು ಗ್ರಾಮ ಲೆಕ್ಕಾಧಿಕಾರಿಯು ₹ 40ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಅದೇ ಗ್ರಾಮದ ಪ್ರಕಾಶ ಚಂದ್ರಪ್ಪ ಶಿಂಗ್ಯಾಗೋಳ, ಲೋಕಾಯುಕ್ತ ಠಾಣೆಗೆ 2011ರ ಜುಲೈ 1ರಂದು ದೂರು ನೀಡಿದ್ದರು. ಅದೇ ದಿನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿ ಬಂಧಿಸಿದ್ದರು. ಲಂಚದ ಹಣ ₹ 40ಸಾವಿರ ವಶಪಡಿಸಿಕೊಂಡಿದ್ದರು.