ಜತ್ತ- ಜಾಬೋಂಟಿ ರಾಜ್ಯ ಹೆದ್ದಾರಿಯಲ್ಲಿ ದರೂರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 50 ವರ್ಷ ಹಳೆಯ ಸೇತುವೆಯು ಇತ್ತೀಚಿಗೆ ಬಂದ ಪ್ರವಾಹ ವೇಳೆ ಮುಳುಗಡೆಯಾಗಿ 22 ದಿನಗಳು ರಸ್ತೆ ಸಂಪರ್ಕ ಕಡಿತವಾಗಿತ್ತು. ಸಮೀಪದ ತಡೆಗೋಡೆ ಮತ್ತು ರಸ್ತೆ ಕೂಡ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿತ್ತು. ಹೀಗಾಗಿ, ಪರಿಶೀಲನೆ ನಡೆಸಲಾಯಿತು.