‘ಭೂಮಿ ತಂತ್ರಾಂಶದಲ್ಲಿ ‘ಹಳ್ಳದ’ ಎಂಬ ಅಡ್ಡಹೆಸರಿನ ಪಹಣಿಗಳಲ್ಲಿ ‘ಹಳ್ಳ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಸವದತ್ತಿ ತಾಲ್ಲೂಕಿನ ಚಿಕ್ಕ ಉಳ್ಳಿಗೇರಿ ‘ಹಳ್ಳದ’ ಕುಟುಂಬದವರಿಗೆ ಪರಿಹಾರ ದೊರೆತಿಲ್ಲ. ಇದು ಖಾಸಗಿ ಜಮೀನು ಎಂದು ನಮೂದಿಸಿ, ಬೆಳೆ ಸಮೀಕ್ಷೆಗೆ ಹಾಗೂ ನೆರೆ ಪರಿಹಾರ ಪಡೆಯಲು ಅನುಕೂಲ ಮಾಡಿಕೊಡಬೇಕು’ ಎಂದು ಸಂಘದ ಸಂಚಾಲಕರಾದ ಚೂನಪ್ಪ ಪೂಜಾರಿ ಮತ್ತು ರಾಜ್ಯ ಸಲಹಾ ಸಮಿತಿ ಸದಸ್ಯೆ ಜಯಶ್ರೀ ಗುರಣ್ಣವರ ಒತ್ತಾಯಿಸಿದರು.