<p><strong>ಮುಗಳಖೋಡ:</strong> ಪಟ್ಟಣದಲ್ಲಿ ಈಗ ಎಲ್ಲಿ ನೋಡಿದರೂ ಬ್ಯಾರನ್, ಪೋಸ್ಟರ್, ಬಂಟಿಂಗ್ಸ್ಗಳದ್ದೇ ಹಾವಳಿ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಈಗಲೂ ಹಳೆ ಬ್ಯಾನರ್ಗಳು ರಾರಾಜಿಸುತ್ತಿವೆ. ಕಾರ್ಯಕ್ರಮ ಮುಗಿದು ತಿಂಗಳಾದರೂ ಕೆಲವರು ಹಾಗೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಪರವಾನಗಿ ಇಲ್ಲದೆಯೇ ಬ್ಯಾನರ್ಗಳನ್ನು ಕಟ್ಟಿದ್ದಾರೆ.</p>.<p>ಈ ಸಂಗತಿ ಜನ– ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದೆ ಎಂಬುದು ಒಂದೆಡೆಯಾದರೆ, ಪಟ್ಟಣದ ಅಂದವನ್ನೂ ಹಾಳು ಮಾಡುತ್ತಿರುವುದು ಇನ್ನೊಂದೆಡೆ. ಸಾರ್ವಜನಿಕ ರಸ್ತೆಗಳನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಕಡಿವಾಣವೇ ಇಲ್ಲವಾಗಿದೆ.</p>.<p>ಪಟ್ಟಣದಲ್ಲಿ ನಡೆಯುವ ಯಾವುದೇ ಹಬ್ಬ, ಹರಿದಿನಗಳ, ಕಾರ್ಯಕ್ರಮಗಳ, ದೇವರ ಜಾತ್ರೆ ಮಹೋತ್ಸವಗಳ, ರಾಜಕೀಯ ನಾಯಕರ ಭೇಟಿ, ಪ್ರಭಾವಿ ವ್ಯಕ್ತಿಗಳ ಜನ್ಮದಿನದ ಶುಭಾಶಯ ಹೀಗೆ ತಹರೇವಾರು ಬ್ಯಾನರ್ಗಳು ಈಗಲೂ ರಾರಾಜಿಸುತ್ತಿವೆ. ಇವುಗಳಿಗೆ ಹೇಳುವವರು– ಕೇಳುವವರು ದಿಕ್ಕೇ ಇಲ್ಲ. </p>.<p>ವಿವಿಧ ರೀತಿಯ ಸ್ವಾಗತ ಕಮಾನುಗಳನ್ನು ಶುಭಾಶಯಗಳನ್ನು ಕೋರುವ ಫ್ಲೆಕ್ಸ್ಗಳನ್ನು ಕಟ್ಟುಲು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ದಿನನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.</p>.<p>ರಸ್ತೆ ವಿಭಜಕಗಳು, ವಿದ್ಯುತ್ ಕಂಬಗಳು, ವೃತ್ತಗಳು ಹಾಗೂ ಅಂಡಿಗಳು ಮುಂಗಟ್ಟುಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬ್ಯಾನರ್ಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಮಳೆಯ ಸಂದರ್ಭದಲ್ಲಿ ಈ ಬ್ಯಾನರ್ಗಳು ಜೀವ ಅಪಾಯಕ್ಕೆ ಕಾರಣವಾಗುವಂತಹ ಸ್ಥಿತಿಯನ್ನು ನಿರ್ಮಿಸುತ್ತಿವೆ.</p>.<p>ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿ– ಮಳೆ ಬಂದಾಗ ಈ ಬ್ಯಾನರ್ಗಳು ಕುಸಿದು ಬೀಳುವ ಭೀತಿ ಇದ್ದರೂ, ಅದನ್ನು ಸರಿಪಡಿಸಲು ಯಾರು ಮುಂದಾಗುವುದಿಲ್ಲ.</p>.<p>ಪುರಸಭೆಯ ನಿಯಮಾವಳಿಯ ಪ್ರಕಾರ ಸಾರ್ವಜನಿಕ ರಸ್ತೆಗಳು, ಡಿವೈಡರ್ಗಳು ಹಾಗೂ ಸರ್ಕಾರಿ ಆಸ್ತಿಗಳ ಮೇಲೆ ಬ್ಯಾನರ್, ಫ್ಲೆಕ್ಸ್ ಅಥವಾ ಜಾಹೀರಾತುಗಳನ್ನು ಅಳವಡಿಸಲು ಪೂರ್ವಾನುಮತಿ ಕಡ್ಡಾಯ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ವಾಸ್ತವದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.</p>.<p>ಅನಧಿಕೃತ ಹಾಗೂ ಪೂರ್ವಾನುಮತಿ ಪಡೆಯದೇ, ಅದಕ್ಕೆ ತಕ್ಕ ಶುಲ್ಕ ಬರಿಸಿದೇ ಇರುವುದರಿಂದ ಪುರಸಭೆಗೆ ಬರುವ ಆದಾಯಕ್ಕೂ ಬರೆ ಎಳೆದಂತಾಗಿದೆ.</p>.<p>ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಅವ್ಯವಸ್ಥೆ ಸರಿಪಡಿಸಬೇಕು. ಅನತ್ಯ ಫಲಕಗಳನ್ನು ತೆರವು ಮಾಡಬೇಕು. ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಅನುಮತಿ ಇಲ್ಲದೇ ಬ್ಯಾನರ್ ಹಾಕಿದವರಿಗೆ ದಂಡ ವಿಧಿಸಬೇಕು ಎಂದೂ ಪಟ್ಟಣದ ಜನ ಆಗ್ರಹಿಸಿದ್ದಾರೆ.</p>.<div><blockquote>ರಸ್ತೆ ವಿಭಜಕ ಹಾಗೂ ವಿದ್ಯುತ್ ಕಂಬಗಳಿಗೆ ಬ್ಯಾನರುಗಳನ್ನು ಕಟ್ಟುವುದರಿಂದ ತೊಂದರೆಯಾಗುತ್ತಿದೆ. ಕಟ್ಟಿದವರ ಮೇಲೆ ಕಾನುನು ಕ್ರಮ ಜರುಗಿಸಬೇಕು.</blockquote><span class="attribution">– ಮೋಹನ ಲಮಾಣಿ, ಉಪಾಧ್ಯಕ್ಷ ಕೆಆರ್ಎಸ್ ಪಕ್ಷ ರಾಯಬಾಗ ತಾಲ್ಲೂಕು</span></div>.<div><blockquote>ಪಟ್ಟಣದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತಿ ಚದರ್ ಅಡಿಗೆ ₹5 ದರವಿದೆ. ಮಠದಿಂದ ಅವಳಡಿಸಲಾದ ಬ್ಯಾನರುಗಳಿಗೆ ಅನುಮತಿ ಪಡೆದಿಲ್ಲ ಶುಲ್ಕ ನೀಡಿಲ್ಲ.</blockquote><span class="attribution">– ಉದಯಕುಮಾರ ಘಟಕಾಂಬಳೆ, ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ</span></div>.<div><blockquote>ಜಾಹೀರಾತು ಮತ್ತು ಬ್ಯಾನರುಗಳ ಅನುಮತಿ ನೀಡಿ ಶುಲ್ಕ ಪಡೆಯುವುದು ಮುಖ್ಯಾಧಿಕಾರಿ ಜವಾಬ್ದಾರಿ. ಅವರ ಗಮನಕ್ಕೇ ತರದೇ ಅಳವಡಿಸಿದವರ ಮೇಲೆ ಕ್ರಮ ಜರುಗಿಸಬೇಕು.</blockquote><span class="attribution">– ಶಾಂತವ್ವ ಗೋಪಾಲ, ಗೋಕಾಕ ಅಧ್ಯಕ್ಷೆ ಪುರಸಭೆ ಮುಗಳಖೋಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಗಳಖೋಡ:</strong> ಪಟ್ಟಣದಲ್ಲಿ ಈಗ ಎಲ್ಲಿ ನೋಡಿದರೂ ಬ್ಯಾರನ್, ಪೋಸ್ಟರ್, ಬಂಟಿಂಗ್ಸ್ಗಳದ್ದೇ ಹಾವಳಿ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಈಗಲೂ ಹಳೆ ಬ್ಯಾನರ್ಗಳು ರಾರಾಜಿಸುತ್ತಿವೆ. ಕಾರ್ಯಕ್ರಮ ಮುಗಿದು ತಿಂಗಳಾದರೂ ಕೆಲವರು ಹಾಗೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಪರವಾನಗಿ ಇಲ್ಲದೆಯೇ ಬ್ಯಾನರ್ಗಳನ್ನು ಕಟ್ಟಿದ್ದಾರೆ.</p>.<p>ಈ ಸಂಗತಿ ಜನ– ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದೆ ಎಂಬುದು ಒಂದೆಡೆಯಾದರೆ, ಪಟ್ಟಣದ ಅಂದವನ್ನೂ ಹಾಳು ಮಾಡುತ್ತಿರುವುದು ಇನ್ನೊಂದೆಡೆ. ಸಾರ್ವಜನಿಕ ರಸ್ತೆಗಳನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಕಡಿವಾಣವೇ ಇಲ್ಲವಾಗಿದೆ.</p>.<p>ಪಟ್ಟಣದಲ್ಲಿ ನಡೆಯುವ ಯಾವುದೇ ಹಬ್ಬ, ಹರಿದಿನಗಳ, ಕಾರ್ಯಕ್ರಮಗಳ, ದೇವರ ಜಾತ್ರೆ ಮಹೋತ್ಸವಗಳ, ರಾಜಕೀಯ ನಾಯಕರ ಭೇಟಿ, ಪ್ರಭಾವಿ ವ್ಯಕ್ತಿಗಳ ಜನ್ಮದಿನದ ಶುಭಾಶಯ ಹೀಗೆ ತಹರೇವಾರು ಬ್ಯಾನರ್ಗಳು ಈಗಲೂ ರಾರಾಜಿಸುತ್ತಿವೆ. ಇವುಗಳಿಗೆ ಹೇಳುವವರು– ಕೇಳುವವರು ದಿಕ್ಕೇ ಇಲ್ಲ. </p>.<p>ವಿವಿಧ ರೀತಿಯ ಸ್ವಾಗತ ಕಮಾನುಗಳನ್ನು ಶುಭಾಶಯಗಳನ್ನು ಕೋರುವ ಫ್ಲೆಕ್ಸ್ಗಳನ್ನು ಕಟ್ಟುಲು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ದಿನನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.</p>.<p>ರಸ್ತೆ ವಿಭಜಕಗಳು, ವಿದ್ಯುತ್ ಕಂಬಗಳು, ವೃತ್ತಗಳು ಹಾಗೂ ಅಂಡಿಗಳು ಮುಂಗಟ್ಟುಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬ್ಯಾನರ್ಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಾಗೂ ಮಳೆಯ ಸಂದರ್ಭದಲ್ಲಿ ಈ ಬ್ಯಾನರ್ಗಳು ಜೀವ ಅಪಾಯಕ್ಕೆ ಕಾರಣವಾಗುವಂತಹ ಸ್ಥಿತಿಯನ್ನು ನಿರ್ಮಿಸುತ್ತಿವೆ.</p>.<p>ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಗಾಳಿ– ಮಳೆ ಬಂದಾಗ ಈ ಬ್ಯಾನರ್ಗಳು ಕುಸಿದು ಬೀಳುವ ಭೀತಿ ಇದ್ದರೂ, ಅದನ್ನು ಸರಿಪಡಿಸಲು ಯಾರು ಮುಂದಾಗುವುದಿಲ್ಲ.</p>.<p>ಪುರಸಭೆಯ ನಿಯಮಾವಳಿಯ ಪ್ರಕಾರ ಸಾರ್ವಜನಿಕ ರಸ್ತೆಗಳು, ಡಿವೈಡರ್ಗಳು ಹಾಗೂ ಸರ್ಕಾರಿ ಆಸ್ತಿಗಳ ಮೇಲೆ ಬ್ಯಾನರ್, ಫ್ಲೆಕ್ಸ್ ಅಥವಾ ಜಾಹೀರಾತುಗಳನ್ನು ಅಳವಡಿಸಲು ಪೂರ್ವಾನುಮತಿ ಕಡ್ಡಾಯ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ವಾಸ್ತವದಲ್ಲಿ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.</p>.<p>ಅನಧಿಕೃತ ಹಾಗೂ ಪೂರ್ವಾನುಮತಿ ಪಡೆಯದೇ, ಅದಕ್ಕೆ ತಕ್ಕ ಶುಲ್ಕ ಬರಿಸಿದೇ ಇರುವುದರಿಂದ ಪುರಸಭೆಗೆ ಬರುವ ಆದಾಯಕ್ಕೂ ಬರೆ ಎಳೆದಂತಾಗಿದೆ.</p>.<p>ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಅವ್ಯವಸ್ಥೆ ಸರಿಪಡಿಸಬೇಕು. ಅನತ್ಯ ಫಲಕಗಳನ್ನು ತೆರವು ಮಾಡಬೇಕು. ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಬೇಕು. ಅನುಮತಿ ಇಲ್ಲದೇ ಬ್ಯಾನರ್ ಹಾಕಿದವರಿಗೆ ದಂಡ ವಿಧಿಸಬೇಕು ಎಂದೂ ಪಟ್ಟಣದ ಜನ ಆಗ್ರಹಿಸಿದ್ದಾರೆ.</p>.<div><blockquote>ರಸ್ತೆ ವಿಭಜಕ ಹಾಗೂ ವಿದ್ಯುತ್ ಕಂಬಗಳಿಗೆ ಬ್ಯಾನರುಗಳನ್ನು ಕಟ್ಟುವುದರಿಂದ ತೊಂದರೆಯಾಗುತ್ತಿದೆ. ಕಟ್ಟಿದವರ ಮೇಲೆ ಕಾನುನು ಕ್ರಮ ಜರುಗಿಸಬೇಕು.</blockquote><span class="attribution">– ಮೋಹನ ಲಮಾಣಿ, ಉಪಾಧ್ಯಕ್ಷ ಕೆಆರ್ಎಸ್ ಪಕ್ಷ ರಾಯಬಾಗ ತಾಲ್ಲೂಕು</span></div>.<div><blockquote>ಪಟ್ಟಣದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತಿ ಚದರ್ ಅಡಿಗೆ ₹5 ದರವಿದೆ. ಮಠದಿಂದ ಅವಳಡಿಸಲಾದ ಬ್ಯಾನರುಗಳಿಗೆ ಅನುಮತಿ ಪಡೆದಿಲ್ಲ ಶುಲ್ಕ ನೀಡಿಲ್ಲ.</blockquote><span class="attribution">– ಉದಯಕುಮಾರ ಘಟಕಾಂಬಳೆ, ಮುಖ್ಯಾಧಿಕಾರಿ ಪುರಸಭೆ ಮುಗಳಖೋಡ</span></div>.<div><blockquote>ಜಾಹೀರಾತು ಮತ್ತು ಬ್ಯಾನರುಗಳ ಅನುಮತಿ ನೀಡಿ ಶುಲ್ಕ ಪಡೆಯುವುದು ಮುಖ್ಯಾಧಿಕಾರಿ ಜವಾಬ್ದಾರಿ. ಅವರ ಗಮನಕ್ಕೇ ತರದೇ ಅಳವಡಿಸಿದವರ ಮೇಲೆ ಕ್ರಮ ಜರುಗಿಸಬೇಕು.</blockquote><span class="attribution">– ಶಾಂತವ್ವ ಗೋಪಾಲ, ಗೋಕಾಕ ಅಧ್ಯಕ್ಷೆ ಪುರಸಭೆ ಮುಗಳಖೋಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>