ಮತಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಗೆದ್ದರೆ, ಪ್ರಧಾನಿ ಮೋದಿ ಅವರು ಆಯ್ಕೆಯಾದಂತೆ. ಆದ್ದರಿಂದ ಕಾರ್ಯಕರ್ತರು ದಿನಕ್ಕೆ ಎರಡು ಗಂಟೆ, ಬೂತ್ ಅಧ್ಯಕ್ಷರು 40 ದಿನ ಕೆಲಸ ಮಾಡಿದರೆ ಸಾಕು. ಹಿಂದಿನ ವಿಧಾನ ಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚು ಮತ ಪಡೆಯುತ್ತೇವೆ. ಈ ನಿಟ್ಟಿನಲ್ಲಿ ಪಕ್ಷದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿರಿ ಎಂದರು.