‘ಪ್ರಸ್ತುತ ಸರ್ಕಾರ ನೀಡುತ್ತಿರುವ ಸಹಾಯಧನದಿಂದ ವಿಶೇಷ ಶಾಲೆಗಳನ್ನು ನಡೆಸಲು ಆಗುತ್ತಿಲ್ಲ. ಮಕ್ಕಳ ಪಾಲಕರು ಹಾಗೂ ದಾನಿಗಳಿಂದ ಪಡೆದ ದೇಣಿಗೆಯಿಂದ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಇತ್ತ ಗಮನಹರಿಸಿ, ವಿಶೇಷ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು. ಸಂಘ- ಸಂಸ್ಥೆಗಳು ತಮ್ಮ ವೈಯಕ್ತಿಕ ಖಾತೆಯಿಂದ ಸಿಬ್ಬಂದಿಗೆ ಪಾವತಿಸಿದ ₹ 31 ಲಕ್ಷ ವೇತನ ಬಾಕಿ ಉಳಿದಿದ್ದು, ಅದನ್ನೂ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.