ಕಬ್ಬೂರ: ಪಟ್ಟಣದ ಹೊರವಲಯದ ಶೆಲಿಯವ್ವ ದೇವಿ ದೇವಸ್ಥಾನ ಆವರಣದಲ್ಲಿರುವ ಕೆರೆಯು ಬರ ಪರಿಸ್ಥಿತಿಯಲ್ಲೂ ಜೀವಜಲದಿಂದ ಮೈದುಂಬಿಕೊಂಡು ಕಂಗೊಳಿಸುತ್ತಿದೆ. ಅದು ಎಂದೂ ಬತ್ತಿದ ಉದಾಹರಣೆ ಇಲ್ಲ.
ಈ ದೇವಸ್ಥಾನ ಭಕ್ತರು ಬೇಡಿದ್ದನ್ನು ನೀಡುವ ಶ್ರದ್ಧಾಕೇಂದ್ರವಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರು ದೇವಿಯಲ್ಲಿ ಪ್ರಾರ್ಥಿಸಿ, ಕೆರೆಯಲ್ಲಿ ಸ್ನಾನ ಮಾಡುತ್ತಾರೆ. ಇದರಿಂದ ಚರ್ಮರೋಗ ದೂರವಾಗುತ್ತದೆ ಎಂಬ ನಂಬಿಕೆ ಅವರದ್ದು.