‘ನಾನು ಊರಿಗೆ ಹೋಗುವಾಗ ಕಾರಿನ ಮೇಲೆ ಮೂವರು ದರೋಡೆಕೋರರು ಮೊಟ್ಟೆಗಳನ್ನು ಎಸೆದರು. ಕಾರು ನಿಲ್ಲಿಸಿ ಹೊರ ಬರುತ್ತಿದ್ದಂತೆಯೇ ನನ್ನ ಮೇಲೆ ಹಲ್ಲೆ ನಡೆಸಿದರು. ಕಿರುಚಿಕೊಂಡೆನಾದರೆ ಸಹಾಯಕ್ಕೆ ಬರಲು ಅಲ್ಲಿ ಯಾರೂ ಇರಲಿಲ್ಲ. ನನ್ನ ಬಳಿ ಇದ್ದ ₹ 1.68 ಲಕ್ಷ ನಗದು, ₹ 25ಸಾವಿರ ಮೌಲ್ಯದ ಲ್ಯಾಪ್ಟಾಪ್, ₹ 10ಸಾವಿರ ಮೌಲ್ಯದ ಮೊಬೈಲ್ ಫೋನ್, ₹ 35ಸಾವಿರ ನಮೂದಿಸಿರುವ ಚೆಕ್ ಹಾಗೂ ಇತರ ದಾಖಲೆಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು’ ಎಂದು ಸತ್ಯಗೌಡ ಖಡಕಲಾಟ ಠಾಣೆಗೆ ದೂರು ನೀಡಿದ್ದಾರೆ.