‘ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ನಾನು ಹೇಳಿರಲಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳುವವಳು; ಪಕ್ಷದ ಚೌಕಟ್ಟಿನಲ್ಲಿ ಇರುವವಳು ನಾನು. ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಅವರು ಕೊಟ್ಟಿದ್ದನ್ನು ಪ್ರಸಾದವೆಂದು ಸ್ವೀಕರಿಸುತ್ತೇನೆ. ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದು ಸೇರಿದಂತೆ ಪಕ್ಷದ ಎಲ್ಲ ನಿರ್ಧಾರಗಳೂ ತೃಪ್ತಿ ತಂದಿವೆ. ಬೇಸರವೇನಿಲ್ಲ. ಸಮ್ಮಿಶ್ರ ಸರ್ಕಾರವಿರುವುದರಿಂದ ಎಲ್ಲರಿಗೂ ಅವಕಾಶ ಆಗುವುದಿಲ್ಲ. ಜನರು ನನ್ನನ್ನು ಪ್ರಭಾವಿ ಎಂದು ಗುರುತಿಸುತ್ತಾರೆ. ಆ ಬಿರುದೇ ಸಾಕು’ ಎಂದು ಮಾರ್ಮಿಕವಾಗಿ ಹೇಳಿದರು.