ನಾಗರಮುನ್ನೋಳಿ: ‘ನಾಡು–ನುಡಿ ರಕ್ಷಣೆಗಾಗಿ ಎಲ್ಲರೂ ಒಗಟ್ಟಾಗಿ ಹೋರಾಟ ಮಾಡಬೇಕು’ ಎಂದು ಮುಖಂಡ ಸಿದ್ದಪ್ಪ ಮರ್ಯಾಯಿ ಹೇಳಿದರು.
ಗ್ರಾಮದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಡದೇವಿ ಭುವನೇಶ್ವರಿ ಫೋಟೊ ನೆರವೇರಿಸಿ ದಿವಂಗತ ಚಿತ್ರ ನಟ ಪುನೀತ್ ರಾಜ್ಕುಮಾರ್ ಫೋಟೊ ಮೆರವಣಿಗೆಗೆ ಚಾಲನೆ ಅವರು ಮಾತನಾಡಿದರು.
‘ಕನ್ನಡಿಗರು ಭಾಷೆ ವಿಷಯದಲ್ಲಿ ಯಾವುದೇ ಹೋರಾಟಕ್ಕೂ ಹಿಂದೆ ಸರಿಯಬಾರದು. ಕನ್ನಡ ಉಳಿಸಿ–ಬೆಳೆಸಬೇಕು’ ಎಂದರು.
ಬೆಮುಲ್ ನಿರ್ದೇಶಕ ವಿ.ಬಿ. ಈಟಿ, ‘ನಾಡು–ನುಡಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ವಿನಾಯಕ ಕುಂಬಾರ, ಲಕ್ಷ್ಮಿಸಾಗರ ಈಟಿ, ಮಾರುತಿ ಹುಲ್ಲೋಳಿ, ರಮೇಶ ಕಾಳನ್ನವರ, ಶಿವಾನಂದ ಮರ್ಯಾಯಿ, ಡಾ.ಅರುಣ ಮರ್ಯಾಯಿ, ಅನಿಲ ಈಟಿ, ಶ್ರೀಧರ ಗಿಜನ್ನವರ, ಸಂಜು ಕಡಹಟ್ಟಿ, ಅನಿಲ ಕರೋಶಿ, ಮಲ್ಲಪ್ಪ ಮೈತ್ರಿ, ಸಚಿನ ಮೈತ್ರಿ, ರವಿ ಗಿಜನ್ನವರ ಇದ್ದರು.