ತೆಲಸಂಗ: ಇಲ್ಲಿಂದ ಐಗಳಿಗೆ ತೆರಳುವ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯಿಂದ ಎರಡು ವರ್ಷಗಳ ಹಿಂದೆ ನೆಟ್ಟಿದ್ದ ಸಸಿಗಳಲ್ಲಿ ಕೆಲವು, ಜೋರು ಗಾಳಿ ಮತ್ತು ಮಳೆಗೆ ನೆಲಕ್ಕುರಳಿದ್ದನ್ನು ಗಮನಿಸಿದ ಗ್ರಾಮದ ಯುವಕರು ಅವುಗಳ ರಕ್ಷಣೆಗೆ ಶ್ರಮದಾನ ಮಾಡಿದರು.
ಪಕ್ಕದಲ್ಲಿ ಗುಂಡಿ ತೆಗೆದು ಬಡಿಗೆಗೆ ಕಟ್ಟಿ ಗಿಡಗಳನ್ನು ನಿಲ್ಲಿಸಿದ್ದಾರೆ. ಇದರಿಂದ ಅವುಗಳಿಗೆ ಮರು ಜೀವ ಕೊಟ್ಟಂತಾಗಿದೆ. ವಿನಾಯಕ ಗಂಗಾಧರ, ಮಹೇಶ ಮುಧೋಳ, ಸಂಗಮೇಶ ಪೂಜಾರಿ, ಧರೆಪ್ಪ ಮಾಳಿ, ಗಪೂರ ಮುಲ್ಲಾ, ಗುರುರಾಜ ಗಂಗಾಧರ ಸ್ವಯಂ ಪ್ರೇರಣೆಯಿಂದ ಈ ಕೆಲಸ ಮಾಡಿದ್ದಾರೆ.
‘ಬೆಳಿಗ್ಗೆ ಇಲ್ಲಿ ವಾಕ್ ಮಾಡುತ್ತೇವೆ. ಗಿಡಗಳು ವಾಲಿರುವುದನ್ನು ಗಮನಿಸಿದ್ದೆವು. ಹೀಗಾಗಿ, ಅವುಗಳ ರಕ್ಷಣೆಗೆ ಮುಂದಾದೆವು’ ಎಂದು ತಿಳಿಸಿದರು.