ಘಟನಾ ಸ್ಥಳಕ್ಕೆ ಬೆಳಗಾವಿ ಡಿ.ಎಫ್.ಒ ಬಸವರಾಜ ಪಾಟೀಲ, ಖಾನಾಪುರ ಎ.ಸಿ.ಎಫ್ ಸಿ ಬಿ ಪಾಟೀಲ, ಲೋಂಡಾ ಆರ್.ಎಫ್.ಒ ಬಸವರಾಜ ವಾಳದ ಮತ್ತು ಸಿಬ್ಬಂದಿ ಭೇಟಿ ನೀಡಿ ಮೃತ ಚಿರತೆಯ ದೇಹದ ಪಂಚನಾಮೆ ಕೈಗೊಂಡಿದ್ದಾರೆ. ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುರುರಾಜ ಮನಗೂಳಿ ಹಾಗೂ ಗುಂಜಿ ಪಶು ಚಿಕಿತ್ಸಾಲಯದ ಸಿಬ್ಬಂದಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.