ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಆಶ್ರಯದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎ.ಎಸ್.ಐ ಜಯಶ್ರೀ ಜನ್ಮಟ್ಟಿ ಭಾಗವಹಿಸಿದ್ದರು. ಯುವ ಸಾಹಿತಿ ಪ್ರಕಾಶ ಹೊಸಮನಿ, ಡಾ.ಭೀಮರಾವ್ ಅಂಬೇಡ್ಕರ್ ಅವರ ಕವನ ವಾಚನ ಮಾಡಿ ಅವರ ತತ್ವಗಳ ಕುರಿತು ಮಾತನಾಡಿದರು. ಬಸವರಾಜ ಮೇತ್ರಿ, ವಿನಾಯಕ ಪೂಜೇರಿ, ಪ್ರಮೀಣ ಬಡಿಗೇರ, ಎಸ್.ಬಿ. ಮಾವಿನಕಟ್ಟಿ, ಬಂಡೆಪ್ಪ ಮಾದರ, ತೇಜಸ್ವಿನಿ ಪೂಜೇರಿ, ಸಿದ್ದಪ್ಪಾ ಮಾದರ, ಪರಶುರಾಮ ಮಾದರ, ಶಿವನಿಂಗ ಮಾದರ, ಸುರೇಶ ಈರಗಾರ ಇದ್ದರು. ಗಂಗಾ ಬೆಳವಿ ಕಾರ್ಯಕ್ರಮ ನಿರೂಪಿಸಿದರು.