ಬೆಳೆ ಗಳೆಲ್ಲ ಒಣಗಿ ಹೋಗಿವೆ. ಬಹುತೇಕ ಜಮೀನುಗಳಲ್ಲಿ ಬೆಳೆದ ಪೈರುಗಳು ನೆಲಕಚ್ಚಿವೆ. ರೈತ ಜಮೀನು ಸ್ವಚ್ಛಗೊಳಿ ಸಿದ್ದು ಈ ಸಂದರ್ಭದಲ್ಲಿ ವಿಮಾ ಕಂಪೆನಿ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಭೂಮಿಗಳಲ್ಲಿ ಬೆಳೆದ ಬೆಳೆ ಪರೀಶಿಲನೆಗೆ ಬರುತ್ತಿರುವುದು ಹಾಸ್ಯಾಸ್ಪದ’ ಎಂದರು.
ಶ್ರೀಶೈಲ ಶಿವನಗೌಡ ಪಾಟೀಲ ಮಾತನಾಡಿ, ‘ಅರ್ಥವಿಲ್ಲದ ಭೇಟಿ ನೀಡಿ ಕೃಷಿಕರಿಗೆ ಅನ್ಯಾಯದ ವರದಿ ಸಲ್ಲಿಕೆ ಆಗದಂತೆ ಎಚ್ಚರ ವಹಿಸಿಬೇಕು. ಈ ಬಗ್ಗೆ ಶಾಸಕರು, ಉಪವಿಭಾಗಾಧಿಕಾರಿಗಳು, ಸೂಕ್ತ ಕ್ರಮ ಕೈಕೊಳ್ಳಬೇಕು. ಕೇಂದ್ರ ಸರ್ಕಾರದ ಮತ್ತು ವಿಮಾ ಕಂಪನಿ ಅಧಿಕಾರಿಗಳಿಗೆ ಸೂಕ್ತ ಮನವರಿಕೆ ಮಾಡಿಕೊಟ್ಟು ಸಂಪೂರ್ಣ ಪ್ರಮಾಣ ದಲ್ಲಿ ವಿಮೆ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ನೀಲಕಂಠ ಮುದಕನಗೌಡ್ರ, ಗುರುಪುತ್ರ ಕಲ್ಲಪ್ಪಗೌಡ್ರ, ವರ್ತಯ್ಯಾ ಚಿಕ್ಕಮಠ, ಶ್ರೀಶೈಲ ಪಾಟೀಲ, ಶಿವನಗೌಡ ಪಾಟೀಲ, ದಯಾನಂದ ಮುರಕೀ ಭಾಂವಿ, ಇಂದ್ರಾ ಮದಲಭಾವಿ, ಬಸವಣ್ಯಪ್ಪ ಗಾಡದ, ದಿಲಾವರ ಸೈಯದ್, ರುದ್ರಯ್ಯ ಹಿರೇಮಠ, ಮಹಾಬಳೇಶ್ವರ ಮಾಳಗಿ, ಗುರುಪುತ್ರ ಕರೀಕಟ್ಟಿ ಇದ್ದರು. ಗ್ರೇಡ್ 2 ತಹಶೀಲ್ದಾರ್ ಎ.ಎಫ್.ಕಾರವಾರ ಮನವಿ ಸ್ವೀಕರಿಸಿದರು.