ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ಧರಿಸಿ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಕೊಬ್ಬರಿ ಬಟ್ಟಲಿನಲ್ಲಿ ಹಾಲು ಎರೆದರು. ನಗರದ ಕಪ್ಪಗಲ್ಲು ರಸ್ತೆ ವೀರಬ್ರಹ್ಮಮ್ಮಗಾರಿ ಮಠ, ರಾಮಾಂಜನೇಯ ನಗರದ ರಾಮಾಂಜನೇಯ ದೇವಸ್ಥಾನ, ಬಾಲಾಂಜನೇಯ ಗುಡಿ, ಬೆಳಗಲ್ ರಸ್ತೆ, ಮಿಲ್ಲರೆ ಪೇಟೆ, ಸತ್ಯನಾರಾಯಣಪೇಟೆ, ಬನ್ನಪ್ಪ ಬೀದಿ, ವೀರಭದ್ರಯ್ಯ, ಸಂಗಮೇಶ್ವರ, ಆದಿಲಿಂಗೇಶ್ವರ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ಮಲ್ಲೇಶ್ವರ ಗುಡಿ ಸೇರಿ ನಗರದ ವಿವಿಧ ದೇವಸ್ಥಾನಗಳಲ್ಲಿ ಇರುವ ನಾಗಮೂರ್ತಿಗಳಿಗೆ ಬೆಳಿಗ್ಗೆಯಿಂದಲೇ ತೆರಳಿ ಹೂವು, ಹಣ್ಣು, ಕಾಯಿಯೊಂದಿಗೆ ಪೂಜೆ ಸಲ್ಲಿಸಿ, ಕೊನ್ನರಿ ಬಟ್ಟಲಿನಲ್ಲಿ ಹಾಲು ಎರೆದು ಭಕ್ತಿ ಸಮರ್ಪಿಸಿದರು.