ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿ ವಲಯದ ಸಹಯೋಗದಲ್ಲಿ ಕೆಲಸ ಮಾಡಲು ನಮ್ಮ ದೇಶ ಉತ್ಸುಕವಾಗಿದೆ. ಅಲ್ಲದೆ, ವೈದ್ಯಕೀಯ, ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಬಯಸಿದೆ’ ಎಂದರು.
ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಸಿಕೊಂಡ ಅವರು, ‘ವಾಜಪೇಯಿ ಅವರು ಭೇಟಿ ನೀಡಿದ ಬಳಿಕ ಭಾರತದೊಂದಿಗಿನ ನಮ್ಮ ದೇಶದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಮಾರಿಷಸ್ನಲ್ಲಿರುವ ಶೇ 50ರಷ್ಟು ಜನ ಭಾರತೀಯರು’ ಎಂದರು.