‘ಸ್ವಲ್ಪ ಸಮಯದಲ್ಲೇ ರೈಲು ಹೊರಟಿದ್ದರಿಂದ ನಾನು ಹಿಂದೂಪುರ ನಿಲ್ದಾಣದಲ್ಲಿ ಇಳಿಯಲಿಲ್ಲ. ಬದಲಾಗಿ, ಎಲ್ಲ ಬೋಗಿಗಳಿಗೂ ತೆರಳಿ ಹುಡುಕಾಟ ಪ್ರಾರಂಭಿಸಿದೆ. ರಾತ್ರಿ 11.30ಕ್ಕೆ ರೈಲು ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂತು. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಿ, ನನ್ನ ಚಿನ್ನವನ್ನು ವಾಪಸ್ ಕೊಡಿಸಿ’ ಎಂದು ರಿಜಾಯ್ ದೂರಿನಲ್ಲಿ ಕೋರಿದ್ದಾರೆ.