ಕೇಂದ್ರ ಸರ್ಕಾರ ರೈತರ ಅನ್ನಕ್ಕೆ ವಿಷ ಹಾಕುವ ಕೆಲಸ ಮಾಡುತ್ತಿದೆ. ಕೇಂದ್ರ ಜಾರಿಗೆ ತರಲು ಬಯಸುತ್ತಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂತಿದ್ದುಪಡಿ ಕಾಯ್ದೆ ಎಲ್ಲವೂ ಕಾರ್ಪೊರೇಟ್ ಕುಳಗಳ ದಾಹ ತಣಿಸುವ ಸಂಚುಗಳಾಗಿದ್ದು, ಎಲ್ಲ ಕಾಯ್ದೆಗಳನ್ನೂ ವಾಪಸ್ ಪಡೆಯುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ಮಹಾಧರಣಿಯಲ್ಲಿ ಕೈಗೊಳ್ಳಲಾಯಿತು.