‘ರಾಜ್ಯದಲ್ಲಿ 1.86 ಲಕ್ಷ ದೇವಸ್ಥಾನಗಳಿವೆ. ಅದರಲ್ಲಿ ಸುಮಾರು 38 ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆಯ ಅಡಿಯಲ್ಲಿವೆ. ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶೌಚಾಲಯ, ಸ್ನಾನಗೃಹ ನಿರ್ಮಿಸಬೇಕು. ಚಪ್ಪಲಿ ಸ್ಟ್ಯಾಂಡ್, ಹಣ್ಣು, ತೆಂಗಿನಕಾಯಿ, ಹೂವು ಅಂಗಡಿಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ‘ಸಿ’ ವರ್ಗದ ದೇವಸ್ಥಾನಗಳ ಅರ್ಚಕರು ಮತ್ತು ಪರಿಚಾರಕರಿಗೆ ವಿಮೆ, ಸೇವಾ ಭದ್ರತೆ, ಪಿಂಚಣಿ, ಆರೋಗ್ಯ ಕಾರ್ಡ್, ವಸತಿ ಒದಗಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ತಿಳಿಸಿದರು.