ಕೃಷ್ಣಾನಂದ ಅವರು ಹಿಂದೆ ಎಲೆಕ್ಟ್ರಾನಿಕ್ಸಿಟಿ ಆರ್ಟಿಒ ಕಚೇರಿಯಲ್ಲಿ ಎಆರ್ಟಿಒ ಆಗಿದ್ದಾಗ ನಿತ್ಯ 500–1000 ಚಾಲನಾ ಅನುಜ್ಞಾ ಪತ್ರಗಳನ್ನು (ಡಿಎಲ್) ನೀಡಿದ್ದ ಆರೋಪದಲ್ಲಿ ಕಳೆದ ಜನವರಿಯಲ್ಲಿ ಅಮಾನತ್ತಾಗಿದ್ದರು. ಬಳಿಕ ವಿಚಾರಣೆಯನ್ನು ಬಾಕಿ ಇಟ್ಟು ಒಂದೇ ತಿಂಗಳಲ್ಲಿ ಅಮಾನತು ತೆರವು ಮಾಡಿ ಜ್ಞಾನಭಾರತಿ ಆರ್ಟಿಒ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿತ್ತು.