‘ನನ್ನ ತಾಯಿ ಕೆನರಾ ಬ್ಯಾಂಕ್ನ ಬನಶಂಕರಿ ಕಾಮಾಕ್ಯ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ವಾರದ ಹಿಂದೆ ಅವರು ಪ್ರವಾಸ ಹೋಗಿದ್ದು, ಎಟಿಎಂ ಕಾರ್ಡ್ ಮನೆಯಲ್ಲೇ ಇತ್ತು. ಹಣದ ಅಗತ್ಯ ಇದ್ದುದರಿಂದ ಮೇ 15ರ ರಾತ್ರಿ 7.45ರ ಸುಮಾರಿಗೆ ಕೆಇಬಿ ರಸ್ತೆಯಲ್ಲಿನ ಎಟಿಎಂ ಘಟಕದಲ್ಲಿ ₹ 23,500 ಡ್ರಾ ಮಾಡಿಕೊಂಡಿದ್ದೆ. ಆ ನಂತರ ಎಲ್ಲೂ ಎಟಿಎಂ ಕಾರ್ಡ್ ಬಳಸಿಲ್ಲ’ ಎಂದು ಅರುಣ್ ದೂರಿನಲ್ಲಿ ತಿಳಿಸಿದ್ದಾರೆ.