‘ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆಯನ್ನು ಸಹಿಸುವುದಿಲ್ಲ. ಪೊಲೀಸ್ ಠಾಣೆಗೆ ಬಂದು ಧಮಕಿ ಹಾಕುವವರನ್ನು, ತಲೆ ಕಡಿತೀವಿ ಎನ್ನುವವರನ್ನು ಬಿಡಲು ಆಗುತ್ತದೆಯೆ? ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಮಾದರಿ ಗಲಾಟೆ ಮಾಡುತ್ತಾರೆಂಬ ಮಾಹಿತಿ ನನಗೂ ಬಂದಿತ್ತು. ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.