ಮೈಸೂರಿನ ಜಯಪ್ಪಗೌಡ ಅವರು ಸಂಶೋಧನೆ, ಇತಿಹಾಸ, ಹಸ್ತಪ್ರತಿ, ಶಾಸನ, ಅನುವಾದ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಸಂಶೋಧನಾ ಸಹಾಯಕರಾಗಿರುವ ಅವರು, ‘ಕರ್ನಾಟಕ ಕಡಲಾಚೆಯ ಸಂಬಂಧಗಳು’, ‘ಮೂಡಿಗೆರೆ ತಾಲ್ಲೂಕಿನ 5 ಶಾಸನಗಳ ಶೋಧ’, ‘ಮೈಸೂರು ಒಡೆಯರ್’ ಸೇರಿ ವಿವಿಧ ಗ್ರಂಥಗಳನ್ನು ರಚಿಸಿದ್ದಾರೆ.