ಗ್ರಾಮೀಣ ಭಾಗದಲ್ಲಿ ರೈತ ಸಮುದಾಯ ತಮ್ಮ ಮನೆಗಳ ರಾಸುಗಳ ಮೈ ತೊಳೆದು, ಸಿಂಗರಿಸಿ ಪೂಜೆ ಸಲ್ಲಿಸಿ ಬಸವ ಜಯಂತಿ ಆಚರಿಸಿದರು. ಶಿರಗನಹಳ್ಳಿ, ನಿಡವಂದ, ಮಾದೇನಹಳ್ಳಿ, ಲಕ್ಕೂರು ತೋಟ, ಹೊನ್ನೇನಹಳ್ಳಿ, ತಟ್ಟೆಕೆರೆ, ಗ್ರಾಮಗಳಲ್ಲಿನ ಬಸವಣ್ಣ ದೇವಾಲಯಗಳು ಹಾಗೂ ಉಳಿದ ಗ್ರಾಮಗಳ ವಿವಿಧ ದೇವಾಲಯಗಳಲ್ಲಿ ತಳಿರು ತೋರಣ ಕಟ್ಟಿ, ದೇವರಿಗೆ ಪೂಜೆ ಮಾಡಿ ಹೆಸರು ಬೇಳೆ ಪಾನಕ, ಮಜ್ಜಿಗೆ ಹಂಚಿದರು. ಹೋಬಳಿಯ ಸರ್ಕಾರಿ ಕಚೇರಿಗಳು, ಶಾಲೆಗಳಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು ಪೂಜೆ ನಡೆಸಿದರು.