‘ಎಲ್ಲ ಜಾತಿ, ಧರ್ಮ, ಸಮುದಾಯದ ಏಳಿಗೆಗಾಗಿ ಮತ್ತು ಜನಹಿತಕ್ಕಾಗಿ ಶ್ರಮಿಸಿದ ಭೀಮಣ್ಣ ಖಂಡ್ರೆ ಅವರದು ಶುದ್ಧ ಚಾರಿತ್ರ್ಯ. ನುಡಿದಂತೆ ನಡೆ ಅವರ ವ್ಯಕ್ತಿತ್ವ. ಮಹಾಸಭಾದ 20ನೇ ಅಧ್ಯಕ್ಷರಾಗಿ ಸಭಾದ ಸದಸ್ಯರ ಸಂಖ್ಯೆಯನ್ನು ಕೆಲವು ಸಾವಿರದಿಂದ ಲಕ್ಷಕ್ಕೆ ಹೆಚ್ಚಿಸಿ, ಬೆಂಗಳೂರಿನ ಹೃದಯ ಭಾಗವಾದ ಸದಾಶಿವನಗರದಲ್ಲಿ ಜಾಗ ಖರೀದಿಸಿ ಸ್ವಂತ ಕಟ್ಟಡ ನಿರ್ಮಿಸಲು ಕಾರಣರಾದವರು’ ಎಂದೂ ಬಣ್ಣಿಸಿದರು.