‘ರಾಜೇಂದ್ರ ಅವರ ಮಳಿಗೆ ದೊಡ್ಡದಿದೆ. ಅರ್ಧ ಭಾಗವನ್ನು ಬೇರೆಯವರಿಗೆ ಬಾಡಿಗೆ ನೀಡಲು ತೀರ್ಮಾನಿಸಿದ್ದರು. ಇದನ್ನು ತಿಳಿದಿದ್ದ ಪ್ರವೀಣ್, ತನಗೆ ಬಾಡಿಗೆ ನೀಡುವಂತೆ ಕೋರಿದ್ದ. ‘ಚಿನ್ನಾಭರಣ ವ್ಯಾಪಾರವನ್ನು ಪಾಲುದಾರಿಕೆಯಲ್ಲಿ ಮಾಡೋಣವೆಂದು ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ರಾಜೇಂದ್ರ, ಗ್ರಾಹಕರೊಬ್ಬರಿಗೆ ಮಾರಾಟ ಮಾಡಲೆಂದು ತಮ್ಮ ಬಳಿಯ 4 ಕೆ.ಜಿ 644 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ನೀಡಿದ್ದರು. ಇದಾದ ನಂತರ ಆರೋಪಿ ಅಂಗಡಿಗೂ ಬಾರದೇ ತಂದೆ ಜೊತೆ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.