‘ನನಗೆ ಸ್ತ್ರೀವಾದಿ ಲೇಖಕಿ ಎನ್ನುತ್ತಾರೆ. ಹೆಣ್ಣು ಜೀವದ ಅನುಭವಗಳನ್ನು ನನ್ನ ಕೃತಿಯಲ್ಲಿ ಬರೆದಿರುವೆ. ನನ್ನ ‘ಕಾಲಾಂತರ’ ಕಾದಂಬರಿಯಲ್ಲಿ ಮೂರು ತಲೆಮಾರಿನ ಹೆಣ್ಣನ್ನು ಕಾಣಬಹುದು. ನನ್ನ ಬರಹಗಳಿಗೆ ಮೂಲ ಪ್ರೇರಣೆ ಬಾಲ್ಯದಿಂದ ಮನಸ್ಸಿನಲ್ಲಿ ಸಂಗ್ರಹವಾದ ನೆನಪುಗಳು. ನಾನು 5ನೇ ತರಗತಿ ಬಳಿಕ ಶಾಲೆಯನ್ನು ತೊರೆದಿದ್ದೆ. ಅಣ್ಣನ ಪ್ರೋತ್ಸಾಹದಿಂದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ತೇರ್ಗಡೆಯಾದೆ. ಸಂಪ್ರದಾಯದ ಹಾಡುಗಳನ್ನು ಅಮ್ಮ ಬರೆಯುತ್ತಿದ್ದರು. ನಾನೂ ಬರೆಯಲಾರಂಭಿಸಿದೆ. ಬಳಿಕ ಕವಿತೆ, ಕಥೆ, ಕಾದಂಬರಿಯನ್ನು ಬರೆದೆ’ ಎಂದು ಹೇಳಿದರು.