ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

Published 9 ಜೂನ್ 2024, 4:06 IST
Last Updated 9 ಜೂನ್ 2024, 4:06 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ನೀಡುವ ರಾಷ್ಟ್ರಮಟ್ಟದ 23ನೇ ಕಾವ್ಯ ಪುರಸ್ಕಾರಕ್ಕೆ ಕನ್ನಡ ಕವನ ಸಂಕಲನ ಆಹ್ವಾನಿಸಲಾಗಿದೆ.

ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ. 2022ರ ಜನವರಿಯಿಂದ 2023ರ ಡಿಸೆಂಬರ್‌ವರೆಗೆ ಪ್ರಕಟವಾದ ಕೃತಿಗಳನ್ನು ಪರಿಗಣಿಸಲಾಗುತ್ತದೆ. ಕೃತಿಯ 4 ಪ್ರತಿಗಳನ್ನು ಕಳುಹಿಸಬೇಕು. ಅನುವಾದಿತ ಕವನಸಂಕಲನಗಳನ್ನು ಪರಿಗಣಿಸಲಾಗುವುದಿಲ್ಲ. ಆಸಕ್ತರು ಜೂನ್‌ 30ರೊಳಗೆ ಕೃತಿಗಳನ್ನು ಕಳುಹಿಸ ಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಗೋಪಾಲಕೃಷ್ಣ ನಾಯಕ, ಕಾರ್ಯದರ್ಶಿ, ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, ಗಂಗೋತ್ರಿ, ಲಕ್ಷ್ಮೇಶ್ವರ, ಅಂಕೋಲಾ–581314, ಉತ್ತರ ಕನ್ನಡ ಜಿಲ್ಲೆ. ‌ಮಾಹಿತಿಗೆ: 9241095614, 94481 32223.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT