ಸಮಾವೇಶದ ಸಂಘಟನಾ ಕಾರ್ಯದರ್ಶಿ ಎಲ್.ಶ್ರೀನಿವಾಸಮೂರ್ತಿ ಮಾತನಾಡಿ, ವೈದ್ಯಕೀಯ ಲೋಕದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮತ್ತು ಮಾರ್ಪಾಡುಗಳು, ನೂತನ ಚಿಕಿತ್ಸಾ ಕ್ರಮಗಳು, ಹೊಸದಾಗಿ ಆವಿಷ್ಕಾರ ಆಗುತ್ತಿರುವ ಔಷಧಿಗಳು, ಹೃದಯ, ಕಿಡ್ನಿ, ಮಧುಮೇಹ ಹಾಗೂ ಸ್ಥೂಲಕಾಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ರೋಗಿಗಳ ಚಿಕಿತ್ಸಾ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.