2014ರ ಆಗಸ್ಟ್ 26ರಂದೂ ಜಗಳ ತೆಗೆದಿದ್ದ ಅಪರಾಧಿ, ಮುನಿಲಕ್ಷ್ಮಮ್ಮ ಅವರ ಕತ್ತು ಹಿಸುಕಿ ಕೊಂದಿದ್ದ. ಆ ಸಂಬಂಧ ಮೃತ ಮಹಿಳೆಯ ತಂದೆ ಗಿಡ್ಡಪ್ಪ ಮಡಿವಾಳ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಅಂದಿನ ಇನ್ಸ್ಪೆಕ್ಟರ್ ಎಂ.ಎಂ.ಪ್ರಶಾಂತ್,23 ಮಂದಿ ಸಾಕ್ಷಿಗಳ ಹೇಳಿಕೆ ಹಾಗೂ ಪುರಾವೆಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.