‘ಎರಡೂ ಹುದ್ದೆಗಳಿಗೆ ಬಡ್ತಿ ಪಡೆದವರಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಒಬ್ಬರೂ ಇಲ್ಲ. ಜ್ಯೇಷ್ಠತೆ ನಿಗದಿಪಡಿಸಿ ಬಡ್ತಿ ನೀಡುವ ಸಂದರ್ಭದಲ್ಲಿ ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕಾತಿಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಅಕ್ರಮವಾಗಿ ಅಳವಡಿಸಿಕೊಳ್ಳಲಾಗಿದೆ. ಅಲ್ಲದೆ, ಸಾಮಾನ್ಯ ಅರ್ಹತೆಯಡಿ ಜ್ಯೇಷ್ಠತೆಯಲ್ಲಿ ಬಡ್ತಿ ಪಡೆದವರನ್ನೂ ಎಸ್ಸಿ, ಎಸ್ಟಿಗೆ ನೀಡಬೇಕಾದ ಬಡ್ತಿ ಪ್ರಮಾಣ 15:3 ಅನುಪಾತಕ್ಕೆ ಸೇರಿಸಿ ಲೆಕ್ಕಹಾಕಿ ಬಡ್ತಿ ನೀಡಲಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.