‘ತಂದೆಗೆ ಆರೋಗ್ಯ ಹದಗೆಟ್ಟ ಕಾರಣಕ್ಕೆ ಕಂಪನಿಗಳ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು, ಕಾನೂನು ಬಾಹಿರವಾಗಿ ಕಂಪನಿಯ ಸ್ವತ್ತನ್ನು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಿದ್ದರು. ಕಂಪನಿಯ ರಕ್ಷಣೆ ಮಾಡುವಂತೆ ತಂದೆಯವರು, ನನ್ನನ್ನು ನಾರಿಮನ್ ಶೆಲ್ಟರ್ ಕಂಪನಿಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಾರಿಮನ್ ಕಂಪನಿಗೆ ನಿರ್ದೇಶಕನಾಗಿ ನೇಮಿಸಿದ್ದರು. ಕಂಪನಿ ಹಣಕಾಸು ವ್ಯವಹಾರ ಪರಿಶೀಲನೆ ವೇಳೆ ಚೌಡರೆಡ್ಡಿ ಹಾಗೂ ಮೋಹನ್ ಅವರು ಸುಳ್ಳು ಲೆಕ್ಕ ತೋರಿಸಿ, ₹10 ಕೋಟಿಯಿಂದ ₹15 ಕೋಟಿ ವಂಚಿಸಿರುವುದು ಪತ್ತೆಯಾಗಿತ್ತು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.