‘ಶಿವಾಜಿನಗರದ ಸತೀಶ್ ಕುಮಾರ್, ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 19ರಂದು ರಾತ್ರಿ ಇವರನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳಾದ ದೊಮ್ಮಲೂರಿನ ಎಸ್. ಸಂತೋಷ್ (36), ಇಂದಿರಾನಗರದ ಎಂ. ಪವನ್ ಕುಮಾರ್ (26), ತಿಪ್ಪಸಂದ್ರದ ರಂಜಿತ್ ಕುಮಾರ್ (33), ದೊಮ್ಮಲೂರು ಲೇಔಟ್ನ ಜೆ. ವಿನೋದ್ ಮ್ಯಾಥ್ಯೂ (35) ಹಾಗೂ ರಂಗನಾಥ್ನನ್ನು (41) ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.