ಬೆಂಗಳೂರು: ಅತೃಪ್ತ ಶಾಸಕರು ಬಿಜೆಪಿ ಮಾತು ನಂಬಿ ತಮ್ಮ ರಾಜಕೀಯ ಬದುಕು ಹಾಳುಮಾಡಿಕೊಳ್ಳಬಾರದು. ಎಲ್ಲೇ ಇದ್ದರೂ ಮಂಗಳವಾರ ಬೆಳಿಗ್ಗೆ 11ಕ್ಕೆ ಸಭಾಧ್ಯಕ್ಷರ ಮುಂದೆ ಹಾಜರಾಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ರಾತ್ರಿ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಅತೃಪ್ತರು ಈಗ ತುಳಿದಿರುವ ಹಾದಿಯಿಂದ ಬಿಜೆಪಿಗಷ್ಟೇ ಲಾಭ.ವಿಪ್ ಉಲ್ಲಂಘನೆಯಾಗುವುದರಿಂದ ಶಾಸಕರಾಗಿ ಉಳಿಯುವುದಿಲ್ಲ,ಮುಂದಿನ ಸರ್ಕಾರದಲ್ಲಿ ಸಚಿವರಾಗುವುದೂ ಸಾಧ್ಯವಿಲ್ಲ. ರಾಜಕೀಯ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದಿದ್ದಾರೆ.